
ಪ್ರತಿಯೊಬ್ಬ ಮನುಷ್ಯನಲ್ಲೂ ದ್ವೇಷ-ಅಸೂಯೆ ಅನ್ನುವಂತಹ ಗುಣಗಳು ಇದ್ದೇ ಇರುತ್ತವೆ. ಎಂತಹ ಉತ್ತಮವಾದ ಮನುಷ್ಯ ವ್ಯಕ್ತಿತ್ವ ಹೊಂದಿದ್ದರೂ ಕೂಡ ಸ್ಯಾಡಿ ಸಮ್ ಪ್ರತಿಯೊಬ್ಬರಲ್ಲೂ ಕೂಡ ಇರುತ್ತದೆ ಆದರೆ ದ್ವೇಷ ಅಸೂಯೆ ಅನ್ನುವುದು ಮನುಷ್ಯನ ಸ್ವಾಭಾವಿಕ ಗುಣ, ಅದು ಜಾಸ್ತಿಯಾದರೆ ನಮ್ಮ ಸುತ್ತ ಉರುಳಾಗಿ ನಮ್ಮನ್ನೇ ಮುಗಿಸುವಂತಹ ಪ್ರಕ್ರಿಯೆಗೆ ಮುಂದಾಗುತ್ತದೆ, ಆದಷ್ಟು ಅದನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ.
Oct 27, 2021
7 min

ಕರ್ನಾಟಕದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಯಾದ ಕೊಪ್ಪಳ ತನ್ನದೇ ಆದ ಛಾಪು ಕೂಡ ಹೊಂದಿದೆ ಅತ್ಯಂತ ಪವಿತ್ರವಾದ ಐತಿಹಾಸಿಕ ಇತಿಹಾಸವನ್ನು ಕೂಡ ಹೊಂದಿರುವ ಕೊಪ್ಪಳದ ಕುರಿತು ಸಂಕ್ಷಿಪ್ತ ಪರಿಚಯ ಮಾಡಿಕೊಳ್ಳುತ್ತಿದ್ದೇನೆ
Oct 27, 2021
2 min

ಪ್ರತಿಯೊಬ್ಬ ಮನುಷ್ಯನೂ ಆಧ್ಯಾತ್ಮಿಕವಾಗಿ ಬದುಕಿದರೆ ಸಮಾಜದಲ್ಲಿ ಶಾಂತಿ ಮತ್ತು ಸಹಿಷ್ಣುತೆ ನೆಲೆಸುತ್ತದೆ, ಧರ್ಮವನ್ನು ಆಧ್ಯಾತ್ಮಿಕವಾಗಿ ನೋಡಬೇಕೇ ಹೊರತು ಕ್ರೌರ್ಯದಿಂದ ಅಲ್ಲ ಒಂದು ಸಾರಿ ಈ ಆಡಿಯೋವನ್ನು ಕೇಳಿ ನಿಮಗೂ ಕೂಡ ಆತ್ಮಸಮ್ಮಾನ ಆದರೂ ಆಗಬಹುದು
Oct 11, 2021
6 min

ಈ ಆಡಿಯೋವನ್ನು ಕೇಳಿದ ನಂತರ ಹೃದಯವಂತ ಜನರೇ ದಯವಿಟ್ಟು ನಿಮಗೆ rs.100 ದೊಡ್ಡದಲ್ಲ ದಯವಿಟ್ಟು ಇದರಲ್ಲಿರುವ ನಿಮ್ಮಿಂದ ಎಷ್ಟಾಗುತ್ತೆ ಅಷ್ಟು ದಾನಮಾಡಿ ಪುಣ್ಯಕಟ್ಟಿಕೊಳ್ಳಿ
Aug 16, 2021
2 min

ಕಾಮಾತುರಾಣಾಂ ನ ಭಯಂ ನ ಲಜ್ಜಾ: ರಮೇಶ್ ಜಾರಕಿಹೊಳಿ ಯ ಕುರಿತು ಎದ್ದಿರುವ ರಾಸಲೀಲೆ ಪ್ರಕರಣದ ಕುರಿತು ಜೀಬಿ ನ್ಯೂಸ್ ಟಾಕ್ ನ್ಯೂಸ್ ಪಾಡಕಾಸ್ಟ್
Mar 3, 2021
4 min

ಗ್ರಾಮ ಪಂಚಾಯತ್ ಚುನಾವಣೆ ಎಂಬುದು ಕೆಲವರಿಗೆ ಉಪೇಕ್ಷೆ ಎನ್ನಿಸಬಹುದು. ಆದರೆ, ಪಕ್ಷದ ಚಿನ್ಹೆ ಇಲ್ಲದೇ ನಡೆಯುವ ಈ ಗ್ರಾಮ ಪಂಚಾಯತ್ ಚುನಾವಣೆಗಳೇ ದೇಶ, ರಾಜ್ಯ ಜನರ ಸರ್ವಾಂಗೀಣ ಅಭಿವೃದ್ಧಿಯ ತಳಪಾಯ ಅಂತಲೇ ಹೇಳಬೇಕು. ಯಾಕೆ ಅಂತಾ ಕೇಳೋದಾದರೆ, ನಾವು ಸಂಸತ್ತಿ ಆಯ್ಕೆ ಮಾಡಿ ಕಳುಹಿಸುವ ಸಂಸದರಿರಬಹುದು, ವಿಧಾನಸಭೆಗೆ ಚುನಾಯಿಸಿ ಕಳುಹಿಸುವ ಶಾಸಕರಿರಬಹುದು ಕಾನೂನು ರಚಿಸುತ್ತಾರೆ. ಸರ್ವ ಜನಾಂಗದ ಅಭಿವೃದ್ಧಿಗೆ ಅಗತ್ಯವಿರುವ ಅನುದಾನ ಹಂಚಿಕೆ ಮಾಡ್ತಾರೆ. ಹೆಚ್ಚು ಹೆಚ್ಚು ಅನುದಾನ ತಮ್ಮ ಕ್ಷೇತ್ರಕ್ಕೆ ತರುವ ಕೆಲಸ ಮಾಡಬಹುದು. ಆದರೆ, ಸರ್ಕಾರದ ಮಟ್ಟದಲ್ಲಿ ಆಗುವ ನಿರ್ದಾರ- ನಿರ್ಣಯ ಮತ್ತು ಯೋಜನೆಯನ್ನು ಪ್ರತಿಯೊಂದು ಅರ್ಹ ಮನೆ ಮತ್ತು ಅಗತ್ಯವಿರೋ ನಾಗರಿಕನರಿಗೆ ತಲುಪಿಸುವ ಕೆಲಸ ಮಾಡುವುದು ಸ್ಥಳೀಯ ಜನ ಪ್ರತಿನಿಧಿಗಳು. ಈ ಕಾರಣಕ್ಕೆ ಇಲ್ಲಿ ಆಯ್ಕೆ ಆಗುವ ವ್ಯಕ್ತಿ ಒಂದು ಪಕ್ಷಕ್ಕೆ ಸೀಮಿತ ಆಗಬಾರದು ಹಾಗೂ ಚುನಾವಣೆ ನೆಪದಲ್ಲಿ ಮನಸ್ಸು ಹಾಳಾಗಬಾರದು ಅಂತಾನೆ ಸ್ಥಳೀಯ ಚುನಾವಣೆಯಲ್ಲಿ ಪಕ್ಷದ ಚಿನ್ಹೆ ಅಡಿ ಚುನಾವಣೆ ನಡೆಯುವುದುದಿಲ್ಲ. ಇದಿಷ್ಟು ಗ್ರಾಪಂ ಚುನಾವಣೆಯ ಪ್ರಾಮುಖ್ಯತೆ. ಈ ಕಾರಣಕ್ಕೆ ಜನರು ಗ್ರಾಪಂ ಚುನಾವಣೆಯಲ್ಲಿ ಜಾತಿ-ಧರ್ಮ, ಹೆಂಡ- ಖಂಡದ ಜೊತೆಗೆ ಸಂಬಂಧಗಳನ್ನು ನೋಡಿ ಓಟ್ ಮಾಡಬಾರದು. ಬದಲಾಗಿ ಅಭ್ಯರ್ಥಿ ಏನು ಮಾಡಿದ್ದಾನೆ. ಒಂದೊಮ್ಮೆ ಮೊದಲ ಬಾರಿಗೆ ಸ್ಪರ್ಧೆ ಮಾಡಿದ್ದರೆ ಏನು ಮಾಡಬಹುದು ಅಂತಾ ಯೋಚಿಸಿ ಮತ ಹಾಕುವ ಅಗತ್ಯ ಇದೆ.
ಆದರೆ, ದುರಂತ ಎಂದರೆ ಬಹುತೇಕ ಕಡೆ ಗ್ರಾಮ ಪಂಚಾಯತ್ ಗೆ ಇಸ್ಪೀಟ್ ಅಡ್ಡದಲ್ಲಿ ಕಾಲ ಕಳೆಯುವವವರು, ಉಡಾಳರು, ಸದಸ್ಯ ಆಗುವುದನ್ನೇ ಉದ್ಯೋಗ ಮಾಡಿಕೊಳ್ಳುವವರೇ ಸ್ಥಳೀಯ ಪ್ರತಿನಿಧಿ ಆಗ್ತಿರೋದು ದುರಂತ. ಆದರೆ, ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಹೆಚ್ಚು ಯುವಕರು, ವಿದ್ಯಾವಂತರು ಕಣದಲ್ಲಿರೋದು ಒಳ್ಳೆಯ ಬೆಳವಣಿಗೆ. ಈ ಕಾರಣಕ್ಕೆ ಗ್ರಾಪಂ ಚುನಾವಣೆಯಲ್ಲಿ ನಮ್ಮ ಆಯ್ಕೆ ದುಡಿದು ತಿನ್ನುವುದರಲ್ಲಿ ನಂಬಿಕೆ ಇಟ್ಟಿರುವ ವ್ಯಕ್ತಿ ಆಗಬೇಕು. ಜೊತೆಗೆ ಗ್ರಾಪಂ ಸದಸ್ಯ ಎಂದರೆ ಸೇವೆ ಮಾಡುವ, ತನ್ನ ವಾರ್ಡ್ ಮತದಾರರಿಗೆ ಸರಕಾರ ಎಲ್ಲ ಇಲಾಖೆಯಲ್ಲಿನ ಯೋಜನೆ ಬಗ್ಗೆ ಮಾಹಿತಿ ನೀಡುವ, ಗ್ರಾಮ ಪಂಚಾಯತ್ ನಿಂದ ಅನುಷ್ಠಾನಗೊಳ್ಳುವ ಯೋಜನೆಯನ್ನು ಅರ್ಹರಿಗೆ ಮನೆಗೆ ತಲುಪಿಸುವ ವ್ಯಕ್ತಿ ನಮ್ಮ ಆಯ್ಕೆ ಆಗಬೇಕು. ಇದೇ ನಿಜವಾದ ಗ್ರಾಮ ಭಾರತ
Dec 20, 2020
3 min